ಬೆಳ್ತಂಗಡಿ: ಲಾಕ್ಡೌನ್ನಿಂದಾಗಿ ಗ್ಯಾರೇಜ್ ಕಾರ್ಮಿಕರು ಕೆಲಸವಿಲ್ಲದೆ ಕಷ್ಟದಲ್ಲಿದ್ದು ಸರಕಾರದಿಂದ ಪ್ಯಾಕೇಜ್ ಘೋಷಿಸುವಂತೆ ಕ್ರಮ ಕೈಗೊಳ್ಳಬೇಕಾಗಿ ಒತ್ತಾಯಿಸಿ ಶಾಸಕ ಹರೀಶ್ ಪೂಂಜರ ಮೂಲಕ ಗ್ಯಾರೇಜು ಮಾಲಕರ ಸಂಘದ ವತಿಯಿಂದ ಮನವಿ ಸಲ್ಲಿಸಲಾಯಿತು.
ಬೆಳ್ತಂಗಡಿ ವಲಯದಲ್ಲಿ ಸುಮಾರು ೮೦೦ ರಿಂದ ೧ ಸಾವಿರಕ್ಕೂ ಹೆಚ್ಚು ಗ್ಯಾರೇಜು ವೃತ್ತಿಯಲ್ಲಿ ತೊಡಗಿರುವ ಕಾರ್ಮಿಕರು(ಮೆಕ್ಯಾನಿಕ್ಗಳು) ಇದ್ದು ಎಲ್ಲಾ ಕಾರ್ಮಿಕರೂ ಮಧ್ಯಮವರ್ಗದವರು. ಈಗಾಗಲೇ ಸಂಘದ ವತಿಯಿಂದ ಸಾಧ್ಯವಾದಷ್ಟು ಸಹಾಯ ಮಾಡಲಾಗಿದೆ. ಜಿಲ್ಲಾ ಸಂಘದ ವತಿಯಿಂದ ಸರಕಾರಕ್ಕೆ ಈಗಾಗಲೇ ಗಮನಸೆಳೆಯುವ ಮನವಿ ಸಲ್ಲಿಸಲಾಗಿದೆ. ತಾಲೂಕಿನಲ್ಲಿ ಕೆಲವು ಗ್ಯಾರೇಜು ಕಾರ್ಮಿಕರಿಗೆ ಮತ್ತು ಸಣ್ಣಪುಟ್ಟ ಗ್ಯಾರೇಜ್ ಮಾಲಕರು ದೈನಂದಿನ ಖರ್ಚುವೆಚ್ಚಗಳನ್ನು ಭರಿಸಲಾಗದೆ ಸಂಕಷ್ಟಕ್ಕೊಳಗಾಗುವಂತಾಗಿದೆ.
ಆದ್ದರಿಂದ ಸರಕಾರದಿಂದ ಗ್ಯಾರೇಜ್ ಮಾಲಕರಿಗೆ ಪ್ಯಾಕೇಜ್ ಘೋಷಣೆ ಮಾಡುವಂತೆ ಕ್ರಮ ಕೈಗೊಳ್ಳಬೇಕು ಮತ್ತು ತಮ್ಮ ವತಿಯಿಂದ ಸಹಾಯ ಮಾಡಬೇಕು ಎಂದು ಮನವಿಯಲ್ಲಿ ಸಂಘ ವಿನಂತಿಸಿಕೊಂಡಿದೆ.