ಉಜಿರೆ: ರಾಜಸ್ಥಾನದ ಜೈಪುರದಲ್ಲಿ ನಡೆಯುವ ಭಾರತೀಯ ಪರಿದಂತ ತಜ್ಞರ (ISP) ರಾಷ್ಟ್ರೀಯ ಸ್ನಾತ್ತಕೋತ್ತರ ಸಮ್ಮೇಳನದಲ್ಲಿ ಉಪನ್ಯಾಸ ನೀಡಲು ಉಜಿರೆ ಶ್ರೀ ದಂತ ಚಿಕಿತ್ಸಾಲಯದ ಖ್ಯಾತ ದಂತ ವೈದ್ಯ ಹಾಗೂ ಕೆವಿಜಿ ದಂತಮಹಾವಿದ್ಯಾಲಯದ ವಿಭಾಗದ ಮುಖ್ಯಸ್ಥ ಪ್ರೊ| ಡಾ.ಎಂ ಎಂ ದಯಾಕರ್ರವರು ವಿಶೇಷ ಆಹ್ವಾನಿತರಾಗಿದ್ದಾರೆ.
ಎ.19 ರಿಂದ 21 ರವರೆಗೆ ನಡೆಯಲಿರುವ ಈ ಸಮ್ಮೇಳನದಲ್ಲಿ 1600 ತಜ್ಞ ದಂತ ವೈದ್ಯರು ಪಾಲ್ಗೊಳ್ಳಲಿದ್ದು, Implant versus Natural Teeth Preservation-Critical Evaluation ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.