25ನೇ ಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮಾಧ್ಯಮ ಗೋಷ್ಠಿ

0

ಉಜಿರೆ :ದ. ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಉಜಿರೆಯ ಕೃಷ್ಣಾನುಗ್ರಹದಲ್ಲಿ ನಡೆಯುತ್ತಿರುವ 25 ನೇ ಜಿಲ್ಲಾ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಮಾಧ್ಯಮ ಸವಾಲು ಫೆ.4 ರಂದು ನಡೆಯಿತು.

ಬೆಳ್ತಂಗಡಿ ಜೈ ಕನ್ನಡಮ್ಮ ವಾರಪತ್ರಿಕೆಯ ಸಂಪಾದಕ ದೇವಿಪ್ರಸಾದ್ ವಹಿಸಿದ್ದರು. ದೃಶ್ಯ ಮಾಧ್ಯಮದ ಬಗ್ಗೆ ಪತ್ರಕರ್ತ ಎ.ಕೆ. ಕುಕ್ಕಿಲ ಬಂಟ್ವಾಳ, ಪತ್ರಿಕಾ ರಂಗದ ಅಂಗವಾಗಿ ಪತ್ರಕರ್ತ ಸಿನಾನ್ ಇಂದಬೆಟ್ಟು, ಸಾಮಾಜಿಕ ಜಾಲತಾಣದ ಕುರಿತು ಪುತ್ತೂರು ಅಂಬಿಕಾ ಪಿ. ಯು ಕಾಲೇಜು ಪ್ರಾಂಶುಪಾಲ ರಾಕೇಶ್ ಕುಮಾರ್ ಕಮ್ಮಾಜೆ ಮಾತನಾಡಿದರು.

ದ. ಕ. ಜಿಲ್ಲಾ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್ ,ದ. ಕ. ಇಂಡಿಯನ್ ರೆಡ್ ಕ್ರಾಸ್ ಅಧ್ಯಕ್ಷ ಸಿ. ಎ. ಶಾಂತಾರಾಮ ಶೆಟ್ಟಿ, ಉಪಸ್ಥಿತರಿದ್ದರು.

ಎಸ್. ಡಿ. ಎಂ. ಕಾಲೇಜು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಡಾ. ಭಾಸ್ಕರ ಹೆಗಡೆ ಸ್ವಾಗತಿಸಿದರು. ಪತ್ರಕರ್ತ ಮನೋಹರ ಬಳಂಜ ನಿರೂಪಿಸಿದರು.

LEAVE A REPLY

Please enter your comment!
Please enter your name here