ಕನ್ಯಾಡಿll: ಅತೀ ಚಿಕ್ಕ ವಯಸ್ಸಿನಲ್ಲಿ ರಾಷ್ಟ್ರೀಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ ಕರ್ನಾಟಕ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದು ಊರಿನ, ಸರಕಾರಿ ಶಾಲೆಯ ಕೀರ್ತಿ ಹೆಚ್ಚಿಸಿ,. ಎಲ್ಲಾ ಸಾಂಸ್ಕೃತಿಕ ಚಟುವಟಿಕೆಯಲ್ಲಿ ಭಾಗವಹಿಸಿ 42 ಕ್ಕಿಂತಲೂ ಹೆಚ್ಚು ಪ್ರಮಾಣ ಪತ್ರ ತನ್ನದಾಗಿಸಿಕೊಂಡಿರುವ ಕನ್ಯಾಡಿ || ಶಾಲಾ ವಿದ್ಯಾರ್ಥಿನಿ ಶೌರ್ಯ.ಎಸ್.ವಿ ಯನ್ನು ಶಿಕ್ಷಣ ಸಚಿವ ನಾಗೇಶ್ ಸನ್ಮಾನಿಸಿದರು.
ಈ ಸಂದರ್ಬದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ ಎಚ್.ಎಸ್., ಶಿಕ್ಷಣ ಸಂಯೋಜಕ ಸುಭಾಶ್ ಜಾದವ್, ಸಿಆರ್ಪಿ ಪ್ರತಿಮಾ ಕೆ.ಎಂ. ಮುಖ್ಯೋಪಾಧ್ಯಾಯಿನಿ ಫ್ಲೇವಿಯಾ ಡಿಸೋಜಾ, ಗ್ರಾ.ಪಂ.ಉಪಾಧ್ಯಕ್ಷ ಶ್ರೀನಿವಾಸ ರಾವ್ , ಮಾಜಿ ಮಂಡಲ ಪ್ರಧಾನ ಸುಂದರ ಗೌಡ, ಎಸ್.ಡಿ.ಎಂ. ಅಧ್ಯಕ್ಷ ನಂದ ಭಟ್, ಮಾಜಿ ಅಧ್ಯಕ್ಷ ರಾಜೇಂದ್ರ ಅಜ್ರಿ, ಪ್ರಭಾಕರ ಗೌಡ ಬೊಳ್ಮ, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಮನೋಹರ್ ರಾವ್, ಗಣೇಶ್ ಬಜಿಲ, ಸುದರ್ಶನ್ ಕೆ.ವಿ. ಗ್ರಾ.ಪಂ. ಸದಸ್ಯ, ಹರೀಶ್ ಸುವರ್ಣ, ವಸಂತ ನಾಯ್ಕ್ ಉಪಸ್ಥಿತರಿದ್ದರು.