ಗೇರುಕಟ್ಟೆ: ಶಂಕಿತ ಡೆಂಗ್ಯೂ ಜ್ವರಕ್ಕೊಳಗಾಗಿದ್ದ ಗ್ರಾ. ಪಂ ಮಾಜಿ ಅಭಿವೃದ್ಧಿ ಅಧಿಕಾರಿ, ಗೇರುಕಟ್ಟೆ ಸನಿಹದ ಸಂಬೋಳ್ಯ ನಿವಾಸಿ ವೈಕುಂಠ ಬೈಪಡಿತ್ತಾಯ (62ವ.) ಅವರು ಜು. 8 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಮೃತರ ಮನೆಗೆ ಕಳಿಯ ಗ್ರಾ. ಪಂ ಆಡಳಿತ ಮಂಡಳಿ ಪದಾಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಭೇಟಿ ನೀಡಿ ಅಂತಿಮದರ್ಶನ ಪಡೆದರು. ಮೃತರು ಪತ್ನಿ, ಪುತ್ರಿಯನ್ನು ಅಗಲಿದ್ದಾರೆ.