ಬೆಳ್ತಂಗಡಿ: ಪ್ರತಿಷ್ಟಿತ ರೋಟರಿ ಅಂತರಾಷ್ಟ್ರೀಯ ಸಂಸ್ಥೆಯ, ಜಿಲ್ಲೆ 3190 ರ ಬೆಂಗಳೂರು ಮೆಟ್ರೊ ಘಟಕದ 2020-21 ರ ಸಾಲಿನ ಅಧ್ಯಕ್ಷರಾಗಿ ರೋ|.ಸಿ.ಎ ಪ್ರೇಮನಾಥ್ ಹೆಗ್ಡೆಯವರು ಜುಲೈ.1 ರಂದು ಅಧಿಕಾರ ಸ್ವೀಕರಿಸಲಿದ್ದಾರೆ.
ಪ್ರಸ್ತುತ ಬೆಂಗಳೂರಿನಲ್ಲಿ ಲೆಕ್ಕಪರಿಶೋಧಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಇವರು ಮೂಲತಃ ಬೆಳ್ತಂಗಡಿ ತಾಲೂಕಿನ ಕಾಯರ್ತಡ್ಕದ ದಿ| ಶ್ರೀ ನಾಭಿರಾಜ ಹೆಗ್ಡೆ ಮತ್ತು ದಿ| ಶ್ರೀಮತಿ ಚಂದ್ರಾವತಿ ಅವರ ಪುತ್ರ.
ಈ ವರ್ಷ ರೋಟರಿ ಸಂಸ್ಥೆಯ ಮೂಲಕ ಟ್ರೀ ಪ್ಲಾಂಟೇಶನ್, ಸಾಕ್ಷರತೆ, ಉಚಿತ ಡಯಾಲಿಸಿಸ್, ಹ್ಯಾಪಿ ಸ್ಕೂಲ್, ವಾಷ್ ಇನ್ ಸ್ಕೂಲ್ ಮುಂತಾದ ಹಲವು ಸಮಾಜಮುಖಿ ಯೋಜನೆಗಳನ್ನು ರೂಪಿಸಿ ಸಫಲಗೊಳಿಸುವ ಉದ್ದೇಶವನ್ನು ಹೊಂದಿದ್ದಾರೆ.