ಬೆಳ್ತಂಗಡಿ: ಇಲ್ಲಿನ ಇಂದಬೆಟ್ಟು ಚರ್ಚ್ ನ ಬಸ್ ನಿಲ್ದಾಣದ ಬಳಿ ಬೆಳ್ತಂಗಡಿಯಿಂದ ಬಂಗಾಡಿ ಕಡೆ ಹೋಗುವ ಪಿಕಪ್ ಹಾಗೂ ಬಂಗಾಡಿ ಕಡೆಯಿಂದ ಬರುತ್ತಿದ್ದ ಕಾರು ಪರಸ್ಪರ ಡಿಕ್ಕಿ ಹೊಡೆದ ಘಟನೆ ಜೂ.25 ರಂದು ಮಧ್ಯಾಹ್ನ ನಡೆದಿದೆ. ನಿಂರ್ದಿ ಲಿಯೋ ಪಿಂಟೋರವರ ಕುಟುಂಬಸ್ಥರಾದ ಅಂಜಲಿನ್ ಪಿಂಟೋ, ಸೀಮಾ, ಸೀಮಾರವರ 3 ಮತ್ತು 2 ವರ್ಷದ ಮಕ್ಕಳು, ಸಿಂತಿಯಾ, ಸಿಂತಿಯಾರವರ ಗಂಡ ಕಾರು ಚಲಾಯಿಸುತ್ತಿದ್ದು ಇವರ ಕಾಲು ತುಂಡಾಗಿ ಮಂಗಳೂರಿನ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ಉಳಿದವರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.