ಬಳಂಜ : ಕಳೆದ ಕೆಲ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿರುವ ಕಡೆಂಗಾಲು ನಿವಾಸಿ ವಸಂತ ಪೂಜಾರಿಯವರ ಚಿಕಿತ್ಸೆಗೆ ಬಳಂಜ ಶಿವಾಜಿ ಫ್ರೆಂಡ್ಸ್ ಕ್ಲಬ್ ವತಿಯಿಂದ ಆರ್ಥಿಕ ನೆರವು ನೀಡಲಾಯಿತು.
ಈ ಸಂದರ್ಭದಲ್ಲಿ ಶಿವಾಜಿ ಫ್ರೆಂಡ್ಸ್ ಕ್ಲಬ್ ಅಧ್ಯಕ್ಷ ಈಶ್ವರ ಭಟ್, ಕಾರ್ಯದರ್ಶಿ ಯೋಗೀಶ್ ದೇವಾಡಿಗ, ಜಗದೀಶ್ ರೈ ಹಾನಿಂಜ, ಕೇಶವ ಕಲ್ಲಾಪು, ಮಾಧವ ದೇವಾಡಿಗ, ಜಗದೀಶ್ ರೈ, ಡೀಕಯ್ಯ ಟೈಲರ್ ಹಾಗೂ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.