ಹತ್ಯಡ್ಕ : ಇಲ್ಲಿಯ ಹೊಸ್ತೋಟ ನಿವಾಸಿ ಉಪೇಂದ್ರ ಭಿಡೆ ಯವರು ಮಂಡಿಸಿದ ಎ ಸ್ಟಡೀ ಆನ್ ಲೀಡರ್ಶಿಪ್, ಕ್ರಿಯೇಟಿವಿಟಿ ಆಂಡ್ ಎಫೆಕ್ಟಿವ್ನೆಸ್ ಆಫ್ ಎಂಪ್ಲೋಯ್ಸ್ ಅಟ್ಯಾಚ್ಡ್ ಟು ಆರ್ಗನೈಸೇಷನ್ಸ್ ಎಂಬ ಮಹಾಪ್ರಬಂಧಕ್ಕೆ ಕಾನ್ಪುರದ ಛತ್ರಪತಿ ಶಾಹುಜೀ ಮಹಾರಾಜ್ ವಿಶ್ವವಿದ್ಯಾಲಯದಿಂದ ಪಿಹೆಚ್ಡಿ ಪದವಿ ಲಭಿಸಿದೆ.
ಇವರು ಕಾನ್ಪುರದ ಛತ್ರಪತಿ ಶಾಹುಜೀ ಮಹಾರಾಜ್ ವಿಶ್ವವಿದ್ಯಾಲಯದ ಮ್ಯಾನೇಜ್ಮೆಂಟ್ ವಿಭಾಗದ ಪ್ರೊಫೆಸರ್ ಡಾ| ಶಿವರಾಜ್ ಕುಮಾರ್ರವರ ಮಾರ್ಗದರ್ಶನದಲ್ಲಿ ಈ ಪ್ರಬಂಧ ಮಂಡಿಸಿದ್ದಾರೆ. ಇವರು ಹತ್ಯಡ್ಕ ಗ್ರಾಮದ ಹೊಸ್ತೋಟ ದಿ| ಎಲ್.ಕೆ ಬಿಢೆಯವರ ಪುತ್ರ.